ಚೆಟ್ಟಳ್ಳಿ, ಸೆ. 24: ಚೆಟ್ಟಳ್ಳಿಯ ವೀರಾಂಜನೆಯ ಯುವಕ ಸಂಘ ಹಾಗೂ ಮಹಿಳಾ ಘಟಕದ ವತಿಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಉಗ್ರರು ಭಾರತಿಯ ಸೈನಿಕ ಶಿಬಿರದ ಮೇಲೆ ಧಾಳಿ ನಡೆಸಿ ಯೋಧರನ್ನು ಗುಂಡಿಕ್ಕಿ ಹತ್ಯೆಗೈದಿರುವದÀನ್ನು ವಿರೋಧಿಸಿ ಪ್ರತಿಭಟಿಸಿದರು. ಪಾಕಿಸ್ತಾನದ ಬಾವುಟವನ್ನು, ಪ್ರಧಾನಿ ನವಾಜ್ ಶರೀಫ್ ಪ್ರತಿಕೃತಿ ದಹನ ಮಾಡಿದರು. ಪ್ರಧಾನ ಸಂಘಟಕ ಬಲ್ಲಾರಂಡ ಕಂಠಿ ಕಾರ್ಯಪ್ಪ, ಮೇರಿ ಅಂಬುದಾಸ್, ವಿಮಾಲಾಕ್ಷಿ ಸರ್ವಸದಸ್ಯರು ಪಾಲ್ಗೊಂಡಿದ್ದರು.