ಶ್ರೀಮಂಗಲ, ಸೆ. 17: ಅಸಂಘಟಿತರಾಗಿ ಚದುರಿ ಹೋಗಿದ್ದ ಶೋಷಿತ ಹಿಂದುಳಿದ ದುರ್ಬಲ ಸಮಾಜವನ್ನು ಸಮಾನತೆಯತ್ತ ತರಲು, ಯಾವದೇ ಜಾತಿಗೆ ಸೀಮಿತವಾಗದೆ ಲೋಕಕಲ್ಯಾಣಕ್ಕಾಗಿ ಶ್ರೀ ನಾರಾಯಣ ಗುರು ಅವರು ಶ್ರಮಿಸಿದ ಮಾನವತಾವಾದಿ ಎಂದು ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ) ಜಿಲ್ಲಾ ಅಧ್ಯಕ್ಷ ಕೆ.ಎಂ. ವಾಸು ಅಭಿಪ್ರಾಯಪಟ್ಟರು.

ಕುಟ್ಟದ ಸರ್ಫಿಯಾ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂನ ಕುಟ್ಟ ಶಾಖೆ ವತಿಯಿಂದ ನಡೆದ 162ನೇ ಗುರು ಜಯಂತಿ ಹಾಗೂ ಓಣಂ ಆಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದಲ್ಲಿ ಮನುಕುಲದ ಏಕತೆಯೇ ಅವರ ಗುರಿಯಾಗಿತ್ತು. ಅವರ ಸಂದೇಶ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಸಂಸ್ಥೆಯ ಮೈಸೂರು ಶಾಖೆಯ ಪ್ರಮುಖರಾದ ಮನೋಜ್ ಮಾತನಾಡಿ, ಎಲ್ಲಾ ಹಬ್ಬಗಳ ಹಿಂದೆ ವೈಚಾರಿಕತೆ ಇರುವದನ್ನು ಮರೆತು ಇಂದು ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಮೋಜು ಮಸ್ತಿಗಾಗಿ ಹಬ್ಬಗಳು ಆಚರಿಸುವಂತಾಗಬಾರದು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು ಕುಟ್ಟ ಪಟ್ಟಣದಲ್ಲಿ ಚಂಡೆವಾದ್ಯದೊಂದಿಗೆ ನಾರಾಯಣ ಗುರು ಅವರ ಪ್ರತಿಮೆ ಹೊತ್ತು ಅಲಂಕೃತ ಮಂಟಪದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯನ್ನು ಆಚರಣಾ ಸಮಿತಿ ಅಧ್ಯಕ್ಷ ಕೆ.ಆರ್. ರಂಜಿತ್ ಲಾಲ್ ಉದ್ಘಾಟಿಸಿದರು. ಈ ಸಂದರ್ಭ ಶಿವು ಮಾದಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಎನ್.ಡಿ.ಪಿ. ಕೊಡಗು ಜಿಲ್ಲಾ ಯೂನಿಯನ್ ಉಪಾಧ್ಯಕ್ಷ ರಾಜೇಂದ್ರ ಬಾಬು, ಕಾರ್ಯದರ್ಶಿ ಎಂ.ವಿ. ಸಜೀವನ್, ಕುಟ್ಟ ಗ್ರಾ.ಪಂ. ಅದ್ಯಕ್ಷೆ ಲೀಲಾ ಪ್ರಭು, ಉಪಾಧ್ಯಕ್ಷ ಹೊಟ್ಟೆಂಗಡ ಪ್ರಕಾಶ್ ಉತ್ತಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಹೆಚ್.ವೈ. ರಾಮಕೃಷ್ಣ, ಬಿ.ಜೆ.ಪಿ ಸ್ಥಾನೀಯ ಅಧ್ಯಕ್ಷ ಎಂ.ಎಸ್, ನವೀನ್ ಅಯ್ಯಪ್ಪ, ಇಸ್ಲಾಮಿಕ್ ಜಮಾಯಿತ್ ಕಮಿಟಿಯ ಅಬ್ದುಲ್ ರಜಾಕ್ ಸಖಾಫಿ, ನಿರ್ಮಲಮಾತಾ ಚರ್ಚಿನ ಫಾದÀರ್ ಲೂರ್ದ್, ಎಸ್.ಎನ್.ಡಿ.ಪಿ ಮಹಿಳಾ ಅಧ್ಯಕ್ಷೆ ಸಿಂದು ಜಿಲ್ಲಾ ಯೂನಿಯನ್ ಕಮಿಟಿ ಸದಸ್ಯರಾದ ಕೆ.ಬಿ. ರಂಜಿತ್ ಕುಮಾರ್, ಕೆ.ಆರ್. ರಂಜಿತ್ ಲಾಲ್, ಗ್ರಾ.ಪಂ. ಸದಸ್ಯ ಪಿ.ಕೆ. ಅರುಣ್ ಕುಮಾರ್, ಕುಟ್ಟ ತಮಿಳು ಸಂಘದ ಅಧ್ಯಕ್ಷ ಮುತ್ತಯ್ಯ ಮತ್ತಿತರರು ಹಾಜರಿದ್ದರು. ಅತೀ ಹೆಚ್ಚು ಅಂಕ ಗಳಿಸಿದ 10ನೇ ತರಗತಿ, ಪಿ.ಯು.ಸಿ, ಪದÀವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕುಟ್ಟ ಶಾಖೆಯ ಅಧ್ಯಕ್ಷ ಪಿ.ಆರ್. ಮೋಹನ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಶಕುಂತಲ ಪ್ರಾರ್ಥಿಸಿ, ಕಾರ್ಯದರ್ಶಿ ಕೆ.ಎ ಶಿಬು ಸ್ವಾಗತಿಸಿ, ಮಾಜಿ ಅಧ್ಯಕ್ಷ ಪಿ.ಕೆ ಪ್ರಶಾಂತ್ ವಂದಿಸಿದರು.