ಹೊದ್ದೂರು, ಡಿ. 4: ಸುಬ್ರಮಣ್ಯ ಷಷ್ಠಿ ಉತ್ಸವವು ಕೊಡಗಿನ ಪ್ರಖ್ಯಾತ ಕ್ಷೇತ್ರಗಳಲ್ಲೊಂದಾದ ಬೈರಂಬಾಡದ ಸುಬ್ರಮಣ್ಯ ದೇಗುಲದಲ್ಲಿ ತಾ. 5ರಂದು (ಇಂದು) ನಡೆಯಲಿದ್ದು, ಸಿದ್ಧತೆಗಳು ನಡೆದಿವೆ.

ದೇಗುಲದ ಆವರಣದಲ್ಲಿ ಪೆಂಡಾಲ್‍ಗಳನ್ನು ಅಳವಡಿಸಲಾಗಿದೆ. ದೇವಳ ಆವರಣವನ್ನು ಶುಚಿಗೊಳಿಸಿ, ಕೆಲವೆಡೆ ಅನ್ನಸಂತರ್ಪಣೆಗಾಗಿ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನವನ್ನು ಸುಣ್ಣ- ಬಣ್ಣ ಬಳಿದು ಅಲಂಕರಿಸಲಾಗಿದೆ. ದೇಗುಲಕ್ಕೆ ತೆರಳುವ ಹಾದಿ ಬದಿಯಲ್ಲಿನ ಕಾಫಿ ಗಿಡಗಳ ರೆಂಬೆ- ಕೊಂಬೆಗಳನ್ನು ಎಳೆದು ಕಟ್ಟಿ ಜನತೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.