ಸುಂಟಿಕೊಪ್ಪ, ನ. 28: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹಾಲೇರಿ ಗ್ರಾಮದ ಕೆ.ಟಿ. ಸಹದೇವ (ಸಗು) ಎಂಬವರ ಮನೆಯಿಂದ ಯಾರು ಇಲ್ಲದ ಸಮಯದಲ್ಲಿ ಹಾಡಹಗಲೇ ಕಳ್ಳತನ ಮಾಡಿದ ಘಟನೆ ನಡೆದಿದೆ.ಎಂದಿನಂತೆ ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಹಿಂಬಾಗಿ ಲನ್ನು ಮುರಿದು ಒಳಪ್ರವೇಶಿಸಿ ಅಲ್ಲೇ ಇದ್ದ ಕೊಡಲಿಯಿಂದ ಗೋದ್ರೆಜನ್ನು ಮುರಿದು ಅದರಲಿದ್ದ 5 ಪವನ್ ಚಿನ್ನ, ರೂ.5000 ನಗದನ್ನು ದೋಚಿದಲ್ಲದೇ, ಮನೆಯಲ್ಲಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್ ಐ ಪಾರ್ಥ ಮತ್ತು ಸಿಬ್ಬಂದಿಗಳು ತೆರಳಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.