ಮಡಿಕೇರಿ/ ಭಾಗಮಂಡಲ, ಅ. 14: ಕೊಡಗಿನ ಆರಾಧ್ಯ ದೈವ, ಕರುನಾಡಿನ ಅನ್ನದಾತೆ ಮಾತೆ ಕಾವೇರಿಯ ದರುಶನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ತಾ. 17ರಂದು ಬೆಳಿಗ್ಗೆ 6.29ಕ್ಕೆ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಕನ್ನಡ ನಾಡಿನ ಜೀವನದಿ ಕಾವೇರಿ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುವ ಮೂಲಕ ಭಕ್ತ ಸಾಗರಕ್ಕೆ ದರುಶನ ನೀಡಲಿದ್ದಾಳೆ.

ಪಾಪವಿನಾಶಿನಿಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಕಾವೇರಿ ತವರು ನೆಲವಾದ ಕೊಡಗಿನ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ನಡೆದಿವೆ.