ವೀರಾಜಪೇಟೆ, ಆ. 6: ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 158ನೇ ಕಿರಣ ತಾ. 7 ರಂದು (ಇಂದು) ನಡೆಯಲಿದೆ. ವೀರಾಜಪೇಟೆಯ ಸಂತ ಅನ್ನಮ್ಮ ಪೌಢಶಾಲೆಯ ಶಿಕ್ಷಕ ಚಂದ್ರಹಾಸ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವೈದ್ಯ, ಪರಿಸರ ತಜ್ಞರೂ ಆದ ಡಾ. ಎಸ್.ವಿ. ನರಸಿಂಹನ್ ‘ಶ್ರೀ ಕುಮುದೇಂದು ಮುನಿ ವಿರಚಿತ ಸಿರಿ ಭೂವಲಯ 718 ಭಾಷೆಗಳನ್ನೊಳ ಗೊಂಡ ವಿಶ್ವದ ಏಕೈಕ ವಿಸ್ಮಯಕಾರಿ ಸಂಖ್ಯಾ ಗ್ರಂಥ’ದ ಕುರಿತು ಉಪನ್ಯಾಸ ನೀಡಲಿದ್ದಾರೆ. ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.