ಮಡಿಕೇರಿ, ಆ. 8: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂ ವತಿಯಿಂದ ಗೋಣಿಕೊಪ್ಪಲಿನಲ್ಲಿ ಸ್ಥಾಪನೆಯಾಗಲಿರುವ ಫೀ.ಮಾ. ಕಾರ್ಯಪ್ಪ ಹಾಗೂ ಜ. ತಿಮ್ಮಯ್ಯ ಅವರ ಪ್ರತಿಮೆಗೆ ಭಾರತೀಯ ಸೇನೆಯಿಂದ 5ಲಕ್ಷ ಅನುದಾನವನ್ನು ಕಲ್ಪಿಸುವದಾಗಿ ಭೂಸೇನಾ ಮುಖ್ಯಸ್ಥ ಜ. ದಲ್ಬೀರ್‍ಸಿಂಗ್ ಭರವಸೆ ನೀಡಿದ್ದಾರೆ ಎಂದು ಫೋರಂ ಸಂಚಾಲಕ ಮೇಜರ್ ನಂಜಪ್ಪ ತಿಳಿಸಿದ್ದಾರೆ.