ವೀರಾಜಪೇಟೆ, ಅ. 21: ಟಿಪ್ಪು ಜಯಂತಿಯ ವಿರುದ್ಧ ಪತ್ರಿಕೆ ಹಾಗೂ ಮಾಧÀ್ಯಮಗಳಲ್ಲಿ ನಿರಂತರವಾಗಿ ಹೇಳಿಕೆಗಳು ಬರುತ್ತಿದ್ದು, ಇಂತಹ ಹೇಳಿಕೆಗಳಿಂದ ಜಿಲ್ಲೆಯ ಅಲ್ಪಸಂಖ್ಯಾತರು ಉದ್ವೇಗ ಹಾಗೂ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿರುವದರಿಂದ ಟಿಪ್ಪು ಜಯಂತಿಯನ್ನು ಪದ್ಧತಿಯಂತೆ ಆಚರಿಸಲಾಗುವದು ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಜಾಜ್ ಅಹಮದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಬಿ.ಜೆ.ಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿದ ಸಂಧರ್ಭ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ನಾಯಕರುಗಳು ಸ್ಪಷ್ಟೀಕರಣ ನೀಡದೆ ಮೌನ ವಹಿಸಲು ಕಾರಣವೇನೆಂದು ಬಹಿರಂಗಪಡಿಸಬೇಕು ಎಂದು ಎಜಾಜ್ ಅಹಮ್ಮದ್ ಆಗ್ರಹಿಸಿದ್ದಾರೆ.