ವೀರಾಜಪೇಟೆ, ಜೂ. 27: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಆಸ್ತಿ ತೆರಿಗೆ, ನೀರಿನ ಕಂದಾಯ, ಉದ್ದಿಮೆ ಪರವಾನಗಿ ಶುಲ್ಕ, ಮಳಿಗೆಗಳ ಬಾಡಿಗೆ ಬಾಕಿ ಇರುವವರು ಜುಲೈ 15ರೊಳಗೆ ಪಾವತಿಸದಿದ್ದರೆ ಬಾಕಿ ವಸೂಲಿಗಾಗಿ ಪಂಚಾಯಿತಿ ಕಠಿಣ ಕ್ರಮ ಜರುಗಿಸಲಿದೆ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ಬಾಕಿದಾರರಿಗೆ ನೋಟೀಸ್ ಮೂಲಕ ಸೂಚನೆ ನೀಡಿದರೂ ಯಾವದೇ ಕ್ರಮ ಕೈಗೊಳ್ಳದ್ದರಿಂದ ವಸೂಲಿಗಾಗಿ ಕಠಿಣ ಕ್ರಮ ಕೈಗೊಳ್ಳುವದು ಅನಿವಾರ್ಯವಾಗಿದೆ ಎಂದು ಪಂಚಾಯಿತಿ ಕಚೇರಿ ತಿಳಿಸಿದೆ.