ಮಡಿಕೇರಿ, ಆ. 12: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ವರಮಹಾಲಕ್ಶ್ಮಿ ಪೂಜೆಯನ್ನು ಭಕ್ತಿ ಸಡಗರ ಸಂಭ್ರಮದಿಂದ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು. ಮಹಿಳೆಯರಿಗಾಗಿ ಭಕ್ತಿಗೀತೆ, ರಸಪ್ರಶ್ನೆ, ಆಶುಭಾಷಣ ಸ್ಪರ್ಧೆ ನಡೆಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಸಮಿತಿ ಸದಸ್ಯರಾದ ಸವಿತ ಭಟ್, ಗೀತ ಗಿರೀಶ್, ಜಯಶೀಲ ಪ್ರಕಾಶ್, ಕಾಂತಾ ನಾಗೇಂದ್ರ ನಡೆಸಿಕೊಟ್ಟರು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿತ್ತು.