ಮಡಿಕೇರಿ, ಜೂ. 18: ನಗರದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಬಡಾವಣೆಗಳಲ್ಲಿ ಭೂಕುಸಿತ, ಮನೆ ಕುಸಿತ, ಇನ್ನಿತರ ಅನಾಹುತಗಳು ಸಂಭವಿಸಿದಲ್ಲಿ ಮುನ್ನೆಚ್ಚರಿಕೆ ಮತ್ತು ಪರಿಹಾರ ಕಾರ್ಯಾಚರಣೆಗೆ ನಗರಸಭೆ ಸಿಬ್ಬಂದಿ ವರ್ಗದವರನ್ನು ವಿಪತ್ತು ನಿರ್ವಹಣೆ ಮಳೆಹಾನಿ ತುರ್ತು ನಿಗಾ ಘಟಕ ರಚನೆ ಮಾಡಿದ್ದು, ಪ್ರತಿ ವಾರ್ಡಿಗೂ ಪ್ರತಿದಿನ ಪರಿಶೀಲಿಸಿ ವರದಿ ನೀಡಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರು ನಿಯೋಜಿತ ಸಿಬ್ಬಂದಿ ದೂರವಾಣಿಗೆ ಕರೆ ಮಾಡಬಹುದಾಗಿದೆ ಮತ್ತು ಕಚೇರಿ ದೂರವಾಣಿ ಸಂಖ್ಯೆ: 08272-224960 ದೂರವಾಣಿಗೂ ಕರೆ ಮಾಡಬಹುದಾಗಿದೆ. ಅಪಾಯಕಾರಿ ಸ್ಥಳದಲ್ಲಿ ವಾಸಿಸುವ ಅಂದರೆ, ಕುಸಿಯುವ ಸ್ಥಿತಿಯಲ್ಲಿರುವ ಬರೆಯ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ, ತಗ್ಗು ಪ್ರದೇಶದಲ್ಲಿ ಪ್ರವಾಹಕ್ಕೆ ಒಳಗಾಗುವ ಪ್ರದೇಶದಲ್ಲಿರುವ ಮತ್ತು ಅತ್ಯಂತ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಹಾಗೂ ಪಾಳು ಬಿದ್ದಿರುವ ಕಟ್ಟಡಗಳನ್ನು ಆಶ್ರಯಿಸಿರುವ ನಿವಾಸಿಗಳು ಮನೆಗಳಲ್ಲಿ ವಾಸವಿರದೆ ಕೂಡಲೇ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಾದ ಬಿ.ಬಿ. ಪುಷ್ಪಾವತಿ ಕೋರಿದ್ದಾರೆ.
ನಗರದಲ್ಲಿ ಮಳೆ ಪ್ರಾರಂಭಗೊಂಡಿರುವದರಿಂದ ನಗರ ವ್ಯಾಪ್ತಿಯ ಬಡಾವಣೆಗಳಲ್ಲಿ ಭೂ ಕುಸಿತ, ಮನೆ ಕುಸಿತ ಇನ್ನಿತರ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುವದರಿಂದ ಈ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಮತ್ತು ಕಚೇರಿಗೆ ತಕ್ಷಣ ವರದಿ ಸಲ್ಲಿಸುವ ಸಂಬಂಧ ಸಿಬ್ಬಂದಿ ವರ್ಗದವರನ್ನು ವಿಪತ್ತು ನಿರ್ವಹಣೆ ಮಳೆಹಾನಿ ತುರ್ತು ನಿಗಾ ಘಟಕ ತಕ್ಷಣ ಜಾರಿಗೆ ಬರುವಂತೆ ನಿಯೋಜಿಸಲಾಗಿದೆ.
ಬಡಾವಣೆಯ ಹೆಸರು ಮತ್ತು ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ ಇಂತಿದೆ: ಸಂಪರ್ಕಾಧಿಕಾರಿ (ವಿವಿಧ ಇಲಾಖೆಗಳಿಂದ ತುರ್ತು ಅವಶ್ಯಕ ಸಹಾಯ ಕೋರಿ ಪತ್ರ ವ್ಯವಹಾರ ಇತ್ಯಾದಿ) ಕಡತ ನಿರ್ವಹಣೆ ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರ ಪ್ರತಿ ದಿನದ ಮಾಹಿತಿ ಕ್ರೋಢೀಕರಿಸುವಲ್ಲಿ ಸೀನಿಯರ್ ಪ್ರೋಗ್ರಾಮರ್. ಸಂಧ್ಯಾ 9980260188, ದ್ವಿತೀಯ ದರ್ಜೆ ಸಹಾಯಕರು ಬಿ.ಆರ್. ಹರಿಣಿ 9481772051, ತ್ಯಾಗರಾಜ ಕಾಲೋನಿ, ರಾಜರಾಜೇಶ್ವರಿ ನಗರ, ಉಕ್ಕುಡ, ಗದ್ದಿಗೆ, ಆeóÁದ್ ನಗರಗಳಿಗೆ ದ್ವಿತೀಯ ದರ್ಜೆ ಸಹಾಯಕ ಬಶೀರ್ ಅಹಮ್ಮದ್, ಮೊ.ಸಂ 9632078890, ಇಂದಿರಾನಗರ, ಚಾಮುಂಡೇಶ್ವರಿ ನಗರ, ಜ್ಯೋತಿ ನಗರ, ವೆಂಕಟರಾಮಣ್ಣ ಲೇಔಟ್, ರೈಫಲ್ ರೇಂಜ್, ವೆಬ್ಸ್, ಡೈರಿ ಫಾರಂ ಏರಿಯಾಗಳಿಗೆ ಸಂಬಂಧಿಸಿದಂತೆ ಕಂದಾಯಾಧಿಕಾರಿ ರಾಮು ಎಂ., ಮೊ.ಸಂ. 9886685495, ಕಂದಾಯ ವಸೂಲಾತಿಗಾರರಾದ ಲೋಹಿತ್ ಮೊ.ಸಂ. 9480268939, ನೌಕರರಾದ ಹೆಚ್.ಪಿ. ಕಾಶಿ, ಮೊ.ಸಂ 9972478751, ಮಂಗಳಾದೇವಿ ನಗರ, ಮೂರ್ನಾಡು ರಸ್ತೆ, ಮಂಗಳೂರು ರಸ್ತೆ, ಜಯನಗರ, ಸುದರ್ಶನ ಬಳಿ, ಅಶೋಕಪುರ ನಗರಕ್ಕೆ ನೌಕರರಾದ ಸೋಮಶೇಖರ್ ಮೊ.ಸಂ. 9449402270, ದ್ವಿತೀಯ ದರ್ಜೆ ಸಹಾಯಕರು ಹೆಚ್. ಶಿವಕುಮಾರ್ ಮೊ.ಸಂ. 9164039552, ಮಲ್ಲಿಕಾರ್ಜುನ ನಗರ, ರಾಣಿಪೇಟೆ, ಕಾವೇರಿ ಲೇಔಟ್, ಭಗವತಿ ನಗರ, ಐ.ಟಿ.ಐ. ಕಾಲೇಜು, ಡಿ.ಆರ್.ಎಫ್.ಎಂ.ಸಿ. ಕಾಲೇಜು ಕನ್ನಂಡಬಾಣೆ, ಪುಟಾಣಿ ನಗರ, ರಾಘವೇಂದ್ರ ದೇವಸ್ಥಾನ, ದೇಚೂರು ಬಡಾವಣೆಗಳಿಗೆ ಪ್ರಥಮ ದರ್ಜೆ ಸಹಾಯಕ ಮನೋಜ್ ಕುಮಾರ್ ಮೊ.ಸಂ. 9980398026, ನಗರಸಭೆ ನೌಕರರುಗಳಾದ ಅರ್ಖಂ, ಮೊ.ಸಂ. 9632732104, ಹಾಗೂ ಚಂದ್ರಶೇಖರ್ ಮೊ.ಸಂ 9945273682 ನಿಯೋಜಿಸಲಾಗಿದೆ.
ಮಳೆಯಿಂದ ಉಂಟಾದ ಭೂಕುಸಿತ ಹಾಗೂ ಇತರೆ ಅನಾಹುತಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವದು. ತುರ್ತು ನಿಗಾ ಘಟಕದವರಿಗೆ ವಾಹನ ಸೌಲಭ್ಯ, ಅಗತ್ಯ ಸಲಕರಣೆ, ಇತರೇ ಎಲ್ಲಾ ಸಹಕಾರ ನೀಡುವದು. ನಗರದಲ್ಲಿ ಎಲ್ಲೆಲ್ಲಿ ನೀರು ಬ್ಲಾಕ್ ಆಗಿದೆ ಅದನ್ನು ಕೂಡಲೇ ತೆರವುಗೊಳಿಸಿ ಕೊಡುವದು ಮತ್ತು ತಾತ್ಕಾಲಿಕ ಚರಂಡಿ ಮಾಡಿಸುವದಕ್ಕೆ ಸಂಬಂಧಿಸಿದಂತೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ. ಮೊ.ಸಂ 9449662326, ಕಿರಿಯ ಅಭಿಯಂತರರಾದ (ಸಿವಿಲ್) ವನಿತ, ಮೊ.ಸಂ 9483826488, ಕಿರಿಯ ಆರೋಗ್ಯ ನಿರೀಕ್ಷಕ ಪಿ.ಎಂ. ನೀಲಾಧರ್ ಮೊ.ಸಂ 9902612085, ಲೆಕ್ಕ ಅಧೀಕ್ಷಕರು ಹನುಮಂತರಾಜು, ಮೊ.ಸಂ 9986285346, ದಫೇದಾರ್ ಓಬ್ಳಿ ಮೊ.ಸಂ 9663724944, ಮತ್ತು ಗ್ರೂಪ್ ‘ಡಿ’ ನೌಕರರಾದ ಕೆ. ಶೀಜಾ ಮೊ.ಸಂ 9880109629 ನಿಯೋಜಿಸಲಾಗಿದೆ.
ಅಗತ್ಯ ಸುರಕ್ಷ ಸಾಮಗ್ರಿ ಖರೀದಿಸಿ ಒದಗಿಸುವ ಬಗ್ಗೆ ಪ್ರಥಮ ದರ್ಜೆ ಸಹಾಯಕಿ ಕವಿತ ಮೊ.ಸಂ 8453928863, ಮೇಲುಸ್ತುವಾರಿ ಹಾಗೂ ಮಳೆಹಾನಿ ಸಂತ್ರಸ್ಥರಿಗೆ ಅಗತ್ಯ ವಸತಿ ಮತ್ತು ಇತರೇ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸುವದು ಮತ್ತು ದಿನನಿತ್ಯ ಬಳಸುವ ಅಕ್ಕಿ ದವಸ-ಧಾನ್ಯ ಸರಬರಾಜಿಗೆ ಕ್ರಮವಿಡುವದಕ್ಕೆ ಸಂಬಂಧಸಿದಂತೆ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೆ.ಎಂ. ರವಿಕುಮಾರ್ ಮೊ.ಸಂ 9480380480, ಸಹಾಯಕ ಅಭಿಯಂತರ ಅರುಣ್ ಕೆ., ಮೊ.ಸಂ 9620197876, ವ್ಯವಸ್ಥಾಪಕರು ಎಂ.ಎ. ತಾಹೀರ್ ಮೊ.ಸಂ 9743132759, ಕಮ್ಯೂನಿಟಿ ಅಫೇರ್ಸ್ ಆಫೀಸರ್ ರೇಖಾ ಗಣಪತಿ ಮೊ.ಸಂ 9448224994. ಲೆಕ್ಕ ಅಧೀಕ್ಷಕರು ಹನುಮಂತರಾಜು, ಮೊ.ಸಂ 9986285346, ಗ್ರೂಪ್ ‘ಡಿ’ ಹೆಚ್.ಆರ್. ಲತಾ ಮೊ.ಸಂ 9008474296 ಹಾಗೂ ದಿನದ 24 ಗಂಟೆಯು ಕಾರ್ಯ ಪ್ರವೃತ್ತರಾಗಿ (24x7) ಸಹಾಯವಾಣಿ ಕೇಂದ್ರ 220111 ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ತಿಳಿಸಿದ್ದಾರೆ.