ಜೈಶಾಲ್‍ಮಿರ್ (ರಾಜಸ್ಥಾನ), ಸೆ. 25: ಉತ್ತರ ಭಾರತದ ರಾಜಸ್ಥಾನದ ಜೈಶಾಲ್‍ಮಿರ್‍ನಲ್ಲಿ ಇಂಡಿಯನ್ ಫೆಡರೇಶನ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್ ಹಾಗೂ ರಾಜಸ್ಥಾನ ಘಟಕದ ವತಿಯಿಂದ ಪತ್ರಕರ್ತರ 71ನೇ ರಾಷ್ಟ್ರೀಯ ಸಮ್ಮೇಳನ ಇಂದು ಆರಂಭಗೊಂಡಿತು.

ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯದ ಪತ್ರಕರ್ತ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯದಿಂದ 44 ಪತ್ರಕರ್ತರು ಪಾಲ್ಗೊಂಡಿದ್ದು, ಇವರೊಂದಿಗೆ ಕೊಡಗು ಜಿಲ್ಲೆಯ 6 ಪತ್ರಕರ್ತರು ಭಾಗಿಗಳಾಗಿದ್ದಾರೆ. ಜಿಲ್ಲಾ ಪತ್ರಕರ್ತರು ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ಪಳೆಯಂಡ ಪಾರ್ಥಚಿಣ್ಣಪ್ಪ, ಕಾರ್ಯದರ್ಶಿ ಹೆಚ್. ಆರ್. ಹರೀಶ್‍ಕುಮಾರ್, ನಿರ್ದೇಶಕ ಬಿ.ಎ. ಭಾಸ್ಕರ್, ಸದಸ್ಯರಾದ ಕಾಯಪಂಡ ಶಶಿ ಸೋಮಯ್ಯ, ಐತಿಚಂಡ ರಮೇಶ್ ಉತ್ತಪ್ಪ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

ಜೈಶಾಲ್‍ಮೀರ್‍ನ ಹೊಟೇಲ್ ಜವಹಾರ್ ನಿವಾಸ್ ಪ್ಯಾಲೇಸ್‍ನಲ್ಲಿ ಆರಂಭಗೊಂಡ ಸಮ್ಮೇಳನವನ್ನು ರಾಜಮನೆತನದ ಮಹಾರಾಜ್ ಮಹರ್‍ವಾಲ್ ಉದ್ಘಾಟಿಸಿದರು.