ಕೂಡಿಗೆ, ಜು. 27: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾ.ಪಂ.ಯ ಕೂಡುಮಂಗಳೂರು ಗ್ರಾಮದ ಬಸವೇಶ್ವರ ದೇವಾಲಯ ಸಮೀಪದಲ್ಲಿ ಅಳವಡಿಸಿರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬಸವೇಶ್ವರ ದೇವಾಲಯದ ಗೋಡೆಯ ಸಮೀಪದಲ್ಲೇ ಇದ್ದು, ಸಾರ್ವಜನಿಕರು ತಮ್ಮ ಜಮೀನುಗಳಿಗೆ ತೆರಳುವ ಮುಖ್ಯದಾರಿಯ ಅಕ್ಕಪಕ್ಕದಲ್ಲಿ ವಾಸದ ಮನೆಗಳು ಇರುವದರಿಂದ ಅಪಘಾತಗಳನ್ನು ತಪ್ಪಿಸಲು ಬೇರೆಡೆಗೆ ಸ್ಥಳಾಂತರಿಸಬೇಕು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸ ಬೇಕೆಂದು ಸ್ಥಳೀಯ ಗ್ರಾಮಸ್ಥರುಗಳಾದ ಮಂಜುನಾಥ್, ಗಿರೀಶ್, ನವೀನ್, ರೈತ ಮುಖಂಡರಾದ ಸೋಮಣ್ಣ, ಗಂಗಾಧರ್ ಆಗ್ರಹಿಸಿದ್ದಾರೆ.