ಮಡಿಕೇರಿ, ಫೆ. 3: 2017-18 ಕ್ಕೆ ರೋಟರಿ ಜಿಲ್ಲೆ 3181 ಗೆ ಮಡಿಕೇರಿಯ ಮಾತಂಡ ಸುರೇಶ್ ಚೆಂಗಪ್ಪ ಆಯ್ಕೆಯಾಗಿದ್ದಾರೆ. ಜೂನ್ ತಿಂಗಳಿನಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಜನವರಿ 15 ರಿಂದ 21 ರವರೆಗೆ ಸ್ಯಾಂಟಿಯಾಗೋದಲ್ಲಿ ನಡೆದ ಅಂತರರಾಷ್ಟ್ರೀಯ ರೋಟರಿ ಗವರ್ನರ್‍ಗಳ ಸಂಸತ್ತಿನಲ್ಲಿ ಸುರೇಶ್ ಚೆಂಗಪ್ಪ ಅವರು ಪತ್ನಿ ಜಯ ದಮಯಂತಿ ಅವರೊಂದಿಗೆ ಭಾಗವಹಿಸಿ ಮರಳಿದ್ದಾರೆ. ವಿವಿಧ ದೇಶ ಹಾಗೂ ರೋಟರಿ ಜಿಲ್ಲೆಗಳಿಂದ ಬಂದಿದ್ದ ನೂತನ ಗವರ್ನರ್‍ಗಳು ರೋಟರಿಯ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿದ್ದಾರೆ.

ರೋಟರಿ ಜಿಲ್ಲೆ 3181 ರ 2017-18 ರ ಜಿಲ್ಲಾ ಕಾರ್ಯದರ್ಶಿಗಳಾಗಿ ಎಂ. ಈಶ್ವರ ಭಟ್, ಮೋಹನ್ ಕರುಂಬಯ್ಯ ಹಾಗೂ ಕೆ.ಕೆ. ವಿಶ್ವನಾಥ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಖಜಾಂಚಿಯಾಗಿ ಎ. ಗೋಪಾಲಕೃಷ್ಣ, ಜಿಲ್ಲಾ ಬುಲ್ಲೆಟಿನ್ ಸಂಪಾದಕರಾಗಿ ಬಿ.ಜಿ. ಅನಂತ ಶಯನ, ಸಾರ್ಜೆಂಟ್ ಎಟ್ ಆಮ್ರ್ಸ್ ಆಗಿ ಜಿ.ಆರ್. ಸದಾಶಿವ್ ಹಾಗೂ ದೇವಣೀರ ತಿಲಕ್, ಕಾನ್ಫರೆನ್ಸ್ ಅಧ್ಯಕ್ಷ - ಉಪಾಧ್ಯಕ್ಷರಾಗಿ ದೇವಣೀರ ಕಿರಣ್ ಮತ್ತು ಅಂಬೆಕಲ್ಲು ಜೀವನ್, ವಲಯ 6 ರ ಅಸಿಸ್ಟೆಂಟ್ ಗವರ್ನರ್ ಆಗಿ ಕುಶಾಲನಗರ ರೋಟರಿ ಸದಸ್ಯ ಮಹೇಶ್ ನಲ್ವಾಡೆ ಆಯ್ಕೆ ಆಗಿದ್ದಾರೆ.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾಗಿ ಹೆಚ್.ಟಿ. ಅನಿಲ್ ಹಾಗೂ ರೋಟರಿ ಅಧ್ಯಕ್ಷರಾಗಿ ಪ್ರೀತಂ ಕಾರ್ಯ ನಿರ್ವಹಿಸಲಿದ್ದಾರೆ.