ಕುಶಾಲನಗರ, ಫೆ . 5: ಬಾಲ ಏಸುವಿನ ವಾರ್ಷಿಕ ಹಬ್ಬದ ಅಂಗವಾಗಿ ಕುಶಾಲನಗರ ತಪೋವನ ಪ್ರಾರ್ಥನಾ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಳ್ಳುಸೋಗೆ ಗ್ರಾಮದ ತಪೋವನದ ಕಾರ್ಮೆಲ್ ಮಠದಲ್ಲಿ ಸೇರಿದ್ದ ಭಕ್ತಾದಿಗಳು ಬಾಲ ಏಸುವಿನ ಪ್ರತಿಮೆಯೊಂದಿಗೆ ಮೆರವಣಿಗೆ ತೆರಳಿದರು.ಕಾರ್ಮೆಲ್ ಚರ್ಚ್‍ನ ಧರ್ಮಗುರುಗಳಾದ ಫಾ.ವಿಲ್ಫ್ರೆಡ್ ರಾಡ್ರಿಗಸ್ ನೇತೃತ್ವದಲ್ಲಿ ಬಲಿಪೂಜೆ ನಂತರ ಭಕ್ತಾದಿಗಳಿಗೆ ಆಶೀರ್ವಚನ ನೀಡಲಾಯಿತು. ಜನರ ನಡುವೆ ಪ್ರೀತಿ, ವಿಶ್ವಾಸ ಗಳಿಸುವದು ಎಲ್ಲರ ಕರ್ತವ್ಯವಾಗಿದೆ ಎಂದು ಫಾ.ವಿಲ್ಫ್ರೆಡ್ ರಾಡ್ರಿಗಸ್ ಈ ಸಂದರ್ಭ ತಿಳಿಸಿದರು. ಫಾ.ಬರ್ಕ್‍ಮನ್ಸ್, ಫಾ.ಜೀವನ್ ತಾವ್ರೊ, ಬ್ರ. ಗ್ರೆಗರಿ ಮೆನೇಜಸ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.