ಸುಂಟಿಕೊಪ್ಪ, ಪೆ. 6: ಸುಂಟಿಕೊಪ್ಪ ಹೋಬಳಿಯ ಒತ್ತುವರಿ ಮಾಡಿಕೊಂಡಿದ್ದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈರಳೆ ವಳಮುಡಿ ಗ್ರಾಮದ ಟಾಟಾ ಸಂಸ್ಥೆ ಕಾಫಿ ಪೈಸಾರಿ ಜಾಗವನ್ನು ತಾಲೂಕು ತಹಶೀಲ್ದಾರ್ ಆದೇಶದಂತೆ ಸರ್ವೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿ ದ್ದಾರೆ. ಸರಕಾರದ ಆದೇಶದಂತೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ ತಹಶೀಲ್ದಾರರು ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಸರ್ವೆ ಸಿಬ್ಬಂದಿಗಳನ್ನು ಕಳುಹಿಸಿ ಸರಕಾರಿ ಜಾಗ ಪತ್ತೆ ಹಚ್ಚಲು ಸೂಚಿಸಿದರು. ಚೆಟ್ಟಳ್ಳಿ ಗ್ರಾ. ಪಂ. ವ್ಯಾಪ್ತಿಯ ಈರಳೆ ವಳಮುಡಿ ಗ್ರಾಮದ ಟಾಟಾ ಕಾಫಿ ತೋಟದ ಸರ್ವೆ ನಂ 28/1 ಅಲ್ಲಿನ 4.68 ಎಕ್ರೆ ಜಾಗವನ್ನು ವಶಪಡಿಸಿಕೊಂಡು ಸರಕಾರಿ ನಾಮಫಲಕವನ್ನು ಅಳವಡಿಸಿದರು. ಸರ್ವೆ ಕಾರ್ಯದಲ್ಲಿ ಹೆಚ್. ಎಸ್. ಮಂಜುನಾಥ್ ಜವಾನ ಪೂವಯ್ಯ, ಕಂದಾಯ ಪರಿವೀಕ್ಷಕ ನಾಗೇಶ್ ರಾವ್, ಗ್ರಾಮಲೆಕ್ಕಿಗ ಉಮೇಶ್, ಸಹಾಯಕ ಗಿರೀಶ್, ಸುಶೀಲ ಗ್ರಾಮಸ್ಥರು ಇದ್ದರು.