ಭಾಗಮಂಡಲ, ಫೆ. 7: ಇಲ್ಲಿಗೆ ಸಮೀಪದ ಚೇರಂಬಾಣೆಯ ತೊಟ್ಲುಕುಂಞ ಅಂಗನವಾಡಿಯಲ್ಲಿ ಮೊನ್ನೆ ದಿನ ಅಪರಿಚಿತ ವ್ಯಕ್ತಿಯೋರ್ವ ಅಂಗನವಾಡಿ ಸಹಾಯಕಿ ಅನಿತಾ ಎಂಬಾಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಡಿಕೇರಿ ತಾಲೂಕು ಅಂಗನವಾಡಿ ಸಹಾಯಕಿಯರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ರೀತಿಯ ಪ್ರಕರಣ ಮುಂದುವರಿಯದಂತೆ, ಸಹಾಯಕಿಯರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಕೋಳಿಬೈಲು ಮಾಲತಿ, ಸುಶೀಲ, ಶೋಭ, ಗೀತಾ, ಜಯಲಕ್ಷ್ಮಿ, ನಿವೃತ್ತ ಶಿಕ್ಷಕಿ ಜಾನಕಿ ಮುಂತಾದವರಿದ್ದರು.