ಮಡಿಕೇರಿ,ಫೆ. 7: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರುಗಳಿಗಾಗಿ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಹೈದರಾಬಾದ್‍ಗೆ ಅಧ್ಯಯನ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನಿಸ ಲಾಯಿತು.

ಮಾರ್ಚ್ 15ರಿಂದ 19ರವರೆಗೆ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಸಂಘದ ಸದಸ್ಯರುಗಳು ಪ್ರವಾಸದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಫೆ. 10 ರೊಳಗೆ ರೂ. 1 ಸಾವಿರ ಶುಲ್ಕ ನೀಡಿ ನೋಂದಾಯಿಸಿಕೊಳ್ಳ ಬಹುದಾಗಿದೆ. ಮೊದಲು ನೋಂದಾವಣಿ ಮಾಡಿಕೊಳ್ಳುವ 40 ಮಂದಿಗೆ ಪ್ರವಾಸಕ್ಕೆ ಆದ್ಯತೆ ನೀಡಲಾಗುತ್ತಿದ್ದು, ನಂತರದಲ್ಲಿ ನೋಂದಾವಣಿಗೆ ಅವಕಾಶ ವಿರುವದಿಲ್ಲ.

ಪ್ರವಾಸದಲ್ಲಿ ಭಾಗವಹಿಸಲು ಇಚ್ಛೆ ಇರುವವರು ಸಂಘದ ಪದಾಧಿಕಾರಿಗಳಾದ ಅನುಕಾರ್ಯಪ್ಪ (9482982228), ಪಾರ್ಥಚಿಣ್ಣಪ್ಪ (9448648225), ಲೋಕೇಶ್ ಸಾಗರ್ (9742632283), ಹರೀಶ್ ಕುಮಾರ್ (9448582636), ಹೆಚ್. ಕೆ. ಜಗದೀಶ್ (9448005693) ಇವರುಗಳನ್ನು ಸಂಪರ್ಕಿಸಿ ನೋಂದಾವಣಿ ಮಾಡಿಕೊಳ್ಳ ಬಹುದಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.