ಗೋಣಿಕೊಪ್ಪಲು, ಫೆ. 6 : ಬೀರುಗ ಪೆರುಮಾಳೇಶ್ವರ ಮಹಾದೇವರ ಭದ್ರಕಾಳಿ ದೇವಸ್ಥಾನ ಪುನ್‍ರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಿತು. 3 ದಿನಗಳ ಕಾಲ ನಡೆದ ಪೂಜಾ ಕಾರ್ಯದಲ್ಲಿ ಪ್ರಸಾದ ಶುದ್ಧಿ, ಅನುಜ್ಞ ಕಳಸ, ಜೀವದಾಸನ್, ಲಿಂಗ ಪ್ರತಿಷ್ಠಾಪನೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಪುದಚೇರಿಯ ಬ್ರಹ್ಮಶೀ ತಂತ್ರಿ ಶಂಕರ್ ನಂಬೂದರಿ ಪಾಡ್, ಸುಜೇತ್ ನಾರಾಯಣ ನಂಬೂದರಿ ತಂಡ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ತಕ್ಕಮುಖ್ಯಸ್ಥ ಅಯ್ಯಮಾಡ ಕುಟುಂಬಸ್ಥರು, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಯ್ಯಮಾಡ ಕಾಶಿ ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.