ಮಡಿಕೇರಿ, ಫೆ. 7: ವಿದೇಶದಿಂದ ಬಂದಿರುವ ರೋಟರಿ ಅಧ್ಯಯನ ತಂಡವನ್ನು ಇಂದು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಓಂಕಾರೇಶ್ವರ ದೇವಾಲಯದ ಬಳಿ ಸ್ವಾಗತಿಸಿದರು. ದೇವಾಲಯಕ್ಕೆ ಭೇಟಿ ನೀಡಿದ ತಂಡವು ಬಳಿಕ ಕೋಟೆ, ವಸ್ತು ಸಂಗ್ರಹಾಲಯ ಮತ್ತು ರಾಜಾಸೀಟ್ ವೀಕ್ಷಿಸಿ ಸಂಜೆ ವಲಯ ಆರರ ರೋಟರಿ ಸಂಸ್ಥೆಗಳ ಸಭೆಯಲ್ಲಿ ಭಾಗವಹಿಸಿದರು. ಚೆನ್ನೈ ಸಂಸ್ಥೆಯಿಂದ ನಾಯಕಿ ರಜನಿ ರಾಜೇಶ್ ಜೊತೆ ವಿವಿಧ ದೇಶಗಳ ಕ್ಲಾಡಿನ್ ಹೆಸ್ಮರ್ ಹುಸೈನಿ, ನೀನಾ ಗಿಯನೋಟೆ, ಸುಜಾನೆ ಡಿಲೆನೆ, ಸಾರಾ ಮರ್ಚೆಂಟ್ ಹಾಗೂ ಅಲ್ಲಿ ಮೋರಿಸ್ ಆಗಮಿಸಿದ್ದರು.