ಮೂರ್ನಾಡು, ಫೆ. 8: ಇಲ್ಲಿನ ಎಂ. ಬಾಡಗ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಮಹಾವಿಷ್ಣು ದೇವಾಲಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧನ ಸಹಾಯ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕು ಯೋಜನಾಧಿಕಾರಿ ಸದಾಶಿವ ಆಗಮಿಸಿ ದೇವಾಲಯದ ಅಧ್ಯಕ್ಷ ಅಚ್ಚಕಾಳೀರ ತಿಮ್ಮಯ್ಯ ಅವರಿಗೆ 2 ಲಕ್ಷ ರೂಪಾಯಿ ಡಿಡಿ ವಿತರಿಸಿದರು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಮುಕ್ಕಾಟೀರ ರವಿ ಚೀಯಣ್ಣ, ಉಪಾಧ್ಯಕ್ಷ ಕಂಬೀರಂಡ ಕಾಳಪ್ಪ, ನಿರ್ದೇಶಕ ಕಂಬೀರಂಡ ನಾಣಯ್ಯ, ಅಚ್ಚಕಾಳೀರ ನಂಜಪ್ಪ, ಅಚ್ಚಕಾಳೀರ ಅಚ್ಚಯ್ಯ, ಕಂಬೀರಂಡ ಮಂದಣ್ಣ, ಗ್ರಾಮಾಭಿವೃದ್ಧಿ ಯೋಜನೆಯ ಮೂರ್ನಾಡು ವಲಯ ಮೇಲ್ವಿಚಾರಕಿ ಪೂರ್ಣಿಮ, ಸೇವಾಪ್ರತಿನಿಧಿ ಶಿವಾನಂದ್ ಇನ್ನಿತರರು ಹಾಜರಿದ್ದರು.