ವೀರಾಜಪೇಟೆ, ಫೆ. 8: ವೀರಾಜಪೇಟೆಯ ಸರ್ವ ಜನಾಂಗ ಸಂಘಟನೆಯ ವತಿಯಿಂದ ತಾ. 22 ರಂದು ನೇತ್ರದಾನ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಪಿ.ಎ. ಮಂಜುನಾಥ್ ತಿಳಿಸಿದರು.

ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ್ ಅವರು, ಸಂಘಟನೆಯಿಂದ ಸಮಾಜ ಸೇವೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಏರ್ಪಡಿಸಲಾಗಿದೆ.

ಇದೇ ಶಿಬಿರದಲ್ಲಿ ನೇತ್ರದಾನದ ದಾನಿಗಳನ್ನು ಗುರುತಿಸಿ ಪಟ್ಟಿ ಮಾಡಿ ಸಂಬಂಧಿಸಿದ ಆಸ್ಪತ್ರೆಗಳಿಗೆ ಕಳುಹಿಸಲಾಗುವದು. ಇಂದಿನ ಸಮಾಜದಲ್ಲಿ ನೇತ್ರದಾನ ವಿಶೇಷ ಮಾನ್ಯತೆಯನ್ನು ಪಡೆದಿದ್ದು, ಇದರಿಂದ ಅಂಧರು, ಅಪಘಾತದಲ್ಲಿ ನೇತ್ರವನ್ನು ಕಳೆದುಕೊಂಡವರು ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೇಳಿದರು.

ವೀರಾಜಪೇಟೆಯ ಪುರಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಶಿಬಿರದಲ್ಲಿ ಉಚಿತ ರಕ್ತ ಪರೀಕ್ಷೆ ಹಾಗೂ ರಕ್ತದ ಗುಂಪನ್ನು ಪತ್ತೆ ಹಚ್ಚಲಾಗುವದು ಎಂದು ಸಂಘಟನೆಯ ಪದಾಧಿಕಾರಿ ಕುಂಞÂೀರ ಸುನು ಸುಬ್ಬಯ್ಯ ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮನೋಜ್ ಗೌಡ, ಫಾಜಿಲ್ ಉಪಸ್ಥಿತರಿದ್ದರು.