ಮಡಿಕೇರಿ, ಫೆ. 8: ಮಡಿಕೇರಿ ತಾಲೂಕು ಎಪಿಎಂಸಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು. ಮರಗೋಡು ಕ್ಷೇತ್ರದ ಅಭ್ಯರ್ಥಿ ಕಾಂಗೀರ ಅಶ್ವಿನ್ ಸತೀಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, ನರಿಯಂದಡ ಕ್ಷೇತ್ರದ ಅಭ್ಯರ್ಥಿ ಚೇನಂಡ ಗಿರೀಶ್ ಪೂಣಚ್ಚ ಉಪಾಧ್ಯಕ್ಷರಾಗಿ ನೇಮಕಗೊಂಡರು.ಎಪಿಎಂಸಿಗೆ ಚುನಾವಣೆ ನಿಗದಿಯಾಗಿದ್ದ ಸಂದರ್ಭ ಈ ಇಬ್ಬರೂ ಅಭ್ಯರ್ಥಿಗಳು ಪ್ರತಿಸ್ಪರ್ಧೆಯೇ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವಿರೋಧವಾಗಿ ಚುನಾಯಿತಗೊಂಡಿದ್ದ ಇವರು ಅವಿರೋಧವಾಗಿಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದುಕೊಂಡಿರುವದು ವಿಶೇಷವಾಗಿದೆ. ತಹಶೀಲ್ದಾರ್ ಕುಸುಮ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಆಯ್ಕೆಯನ್ನು ಪ್ರಕಟಿಸಿದರು.

ಈ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ನೂತನ ಅಧ್ಯಕ್ಷ ಕಾಂಗೀರ ಸತೀಶ್ ಅವರು ಈ ಬಾರಿ ಎಪಿಎಂಸಿಗೆ