ಗುಡ್ಡೆಹೊಸೂರು, ಫೆ. 9: ನ್ಯಾಷನಲ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ವತಿಯಿಂದ ಶನಿವಾರಸಂತೆಯಲ್ಲಿ 7ನೇ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಂಜರಾಯಪಟ್ಟಣದ ಜ್ಞಾನವಾಹಿನಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಾದ ತಸ್ವಿನ್, ಹರ್ಷಿತ್, ವಿಶ್ವನಾಥ್, ಸೋಯಬುದ್ದಿನ್ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಎಂ.ಕೆ. ಕುಶಾಲಪ್ಪ, ಕಾರ್ಯದರ್ಶಿ ನಂದಕುಮಾರ್, ಕರಾಟೆ ತರಬೇತುದಾರ ಸ್ವಾಮಿ, ಮುಖ್ಯ ಶಿಕ್ಷಕ ಸ್ವರೂಪ ಮುಂತಾದವರು ಉಪಸ್ಥಿತರಿದ್ದರು.