ಕುಶಾಲನಗರ, ಫೆ. 9: ಕೊಪ್ಪ ಸಮೀಪದ ಗಿರಗೂರು ಗ್ರಾಮದ ದಿ. ನಾಗರತ್ನ ಅವರ ಜಮೀನಿನಲ್ಲಿ ಶ್ರೀ ಮುನೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮ ನಡೆಯಿತು. ಎರಡು ದಿನಗಳ ಪೂಜಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾ ವಿಧಿಗಳು ಜರುಗಿದವು.

ಸುದರ್ಶನ ಹೋಮ, ವಾಸ್ತುಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗೋಪುರ ಕಳಸ ಪೂಜೆ, ಗಣಪತಿ ಹೋಮದ ಬಳಿಕ ಮುನೇಶ್ವರ ದೇವರ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪುರುಷೋತ್ತಮ್ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಪೂಜಾ ಕಾರ್ಯಕ್ರಮದ ಅಂಗವಾಗಿ ಸಂಜೆ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಾಲಯ ಪ್ರಮುಖರಾದ ಸರಸ್ವತಿ ನಾಗರತ್ನ, ಹರಿಪ್ರಸಾದ್, ಗುರುರಾಜ್ ನಾಣಯ್ಯ, ಜ್ಞಾನಮಣಿ ಮತ್ತಿತರರು ಇದ್ದರು.