ಗೋಣಿಕೊಪ್ಪಲು, ಫೆ. 9: ವೈಲ್ಡ್ ಲೈಫ್ ಫಸ್ಟ್, ಸಂತ ಮೈಕಲರ ಪ್ರೌಢಶಾಲೆ ಮತ್ತು ಕೊಡಗು ವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ತಾ.10ರಂದು (ಇಂದು) ಕಾಡ್ಗಿಚ್ಚು ಜಾಗೃತಿ ಜಾಥಾ ನಡೆಯಲಿದೆ.

ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅವರ ನೇತೃತ್ವದಲ್ಲಿ ಸಂಸ್ಥೆಯ ಬೆಂಗಳೂರಿನ ಸುಧೀಂದ್ರ ಮತ್ತು ತಂಡ, ಶ್ರೀಮಂಗಲದ ಬೋಸ್‍ಮಾದಪ್ಪ, ಪರಿಸರವಾದಿ ಮಡಿಕೇರಿಯ ತಮ್ಮುಪೂವಯ್ಯ, ನಾಪೆÇೀಕ್ಲುವಿನ ಸತೀಶ್, ಪ್ರಮೋದ್ ಮುಂತಾದವರು ಪಾಲ್ಗೊಳ್ಳಲಿದ್ದು ಬೆಳಿಗ್ಗೆ 10.30 ಗಂಟೆಗೆ ಜಾಗೃತಿ ಮೆರವಣಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಚಾಲನೆಗೊಳ್ಳಲಿದೆ.

ಮಡಿಕೇರಿ ಮುಖ್ಯರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಕಾಡ್ಗಿಚ್ಚು ದುಷ್ಪರಿಣಾಮದ ಕುರಿತು ಸಾರ್ವಜನಿಕ ರಿಗೆ ಕರಪತ್ರ ವಿತರಿಸಲಿದ್ದು ಇಂaದಿರಾಗಾಂಧಿ ವೃತ್ತ, ಮಹದೇವಪೇಟೆ ಮಾರುಕಟ್ಟೆ ಮೂಲಕ ಸಾಗಿ ಕಾಲೇಜು ರಸ್ತೆಯಲ್ಲಿ ಜಾಥಾ ಅಂತ್ಯಗೊಳ್ಳಲಿದೆ ಎಂದು ಕೆ.ಎಂ. ಚಿಣ್ಣಪ್ಪ ತಿಳಿಸಿದ್ದಾರೆ.