ಕೂಡಿಗೆ, ಫೆ. 9: ಅರಸಿಕಟ್ಟೆಗೆ ಕಾಫಿ ಹೊಟ್ಟು ಸಾಗಾಟ ಮಾಡಿ ಹಿಂತಿರುಗುತ್ತಿದ್ದ ವೇಳೆ ಲಾರಿಯ ಸ್ಟೇರಿಂಗ್ ಕಳಚಿಕೊಂಡ ಪರಿಣಾಮ ರಸ್ತೆ ಬದಿಯ ಕಲ್ಲು ಬಂಡೆಗೆ ಲಾರಿ ಡಿಕ್ಕಿ ಹೊಡೆದಿದ್ದು, ಚಾಲಕ ಸ್ಥಳದಲ್ಲೇ ದುರ್ಮರಣ ಗೊಂಡಿರುವ ಘಟನೆ ಕೊಣನೂರಿನಲ್ಲಿ ಸಂಭವಿಸಿದೆ.ಕೂಡ್ಲೂರು ನಿವಾಸಿ, ಲಾರಿ ಚಾಲಕ ಪುಟ್ಟೇಗೌಡ (47) ದುರ್ಮರಣ ಕ್ಕೀಡಾದ ದುರ್ದೈವಿ ಯಾಗಿದ್ದು, ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.