ಮಡಿಕೇರಿ, ಫೆ. 9: ಆಸಕ್ತ ಚಾರಣಿಗರ ‘ಕೊಡಗು ಆರೋಹಣ’ ನೂತನ ಸಂಘಟನೆಯನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಂಘಟನೆಯ ಲಾಂಛನವನ್ನು ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಜಿಲ್ಲೆಯ ಹಿರಿಯ ಚಾರಣಿಗರಾದ ರಮ್ಯಾ ಅಪ್ಪಣ್ಣ ಹಾಗೂ ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ತಮ್ಮ ಟ್ರಕ್ಕಿಂಗ್ ಅನುಭವವನ್ನು ಹಂಚಿಕೊಂಡರು.

ಸಂಘಟನೆಯ ಅಧ್ಯಕ್ಷರಾಗಿ ಇ.ಎಲ್. ಸುರೇಶ್, ಉಪಾಧ್ಯಕ್ಷರಾಗಿ ಕೃಪಾ ದೇವರಾಜ್, ಕಾರ್ಯದರ್ಶಿಯಾಗಿ ಪವನ್ ವಶಿಷ್ಠ, ಖಜಾಂಚಿಯಾಗಿ ನಾಪಂಡ ಲೋಕೇಶ್ ಹಾಗೂ ಸದಸ್ಯರಾಗಿ ಕೆ.ಕೆ. ಮಹೇಶ್ ಕುಮಾರ್ ಕೆ.ವಿ. ಸ್ವರ್ಣಗೌರಿ, ಡಾ. ನಝೀಮ, ಟಿ.ಎಂ. ಸುಧೀರ್, ಮಲ್ಲಿಗೆ ಪೈ, ಹೆಚ್.ಡಿ. ರಮೇಶ್, ಸಂಧ್ಯಾ ನವೀನ್, ನರಸಿಂಹ ಪ್ರಸಾದ್, ರವಿ ಭೂತನಕಾಡು ಅವರನ್ನು ಆಯ್ಕೆ ಮಾಡಲಾಯಿತು.