ಸೋಮವಾರಪೇಟೆ, ಫೆ. 10: ತಾಲೂಕಿನ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕ್ಕೋತ್ತರ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಸಂಘಟನೆಯ ಉದ್ಘಾಟನೆಯನ್ನು ಪ್ರಭಾರ ನಿರ್ದೇಶಕ ಪ್ರೊ. ರವೀಂದ್ರಾಚಾರಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜೀವರಸಾಯನ ಶಾಸ್ತ್ರ ವಿಭಾಗದ ಪ್ರೊ. ಮಂಜುಳಾ ಶಾಂತಾರಾಮ್, ಗಣಕಯಂತ್ರ ವಿಭಾಗದ ನಿರ್ದೇಶಕ ಪ್ರೊ. ನಂಜನ್‍ಗೂಡು ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸಂಘಟನೆಯನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಬಿ.ಎಸ್. ಮಮತ, ಸಿ.ಎಸ್. ತಾರಾ, ಹೆಚ್.ಎಸ್. ವೆಂಕಟೇಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.