ಸೋಮವಾರಪೇಟೆ, ಫೆ. 11: ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಆತ್ಮ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕೊಡಗು ವಿದ್ಯಾಸಾಗರ ಕಲಾ ವೇದಿಕೆಯ ಸದಸ್ಯರು ಜಾಗೃತಿ ನಾಟಕ ಪ್ರದರ್ಶಿಸಿದರು.

ವಿದ್ಯಾಸಾಗರ ಕಲಾ ವೇದಿಕೆಯ ರಾಜು ಮತ್ತು ತಂಡದವರು ಆತ್ಮ ಯೋಜನೆಯ ವಿಶೇಷತೆಗಳು, ಕೃಷಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭ ಕೃಷಿ ಇಲಾಖೆಯ ಅಧಿಕಾರಿ ಮುಕುಂದ, ಶನಿವಾರಸಂತೆ ಹೋಬಳಿ ಆತ್ಮ ಯೋಜನೆಯ ತಾಂತ್ರಿಕ ಅಧಿಕಾರಿ ವೇದಪ್ರಿಯಾ, ಪ.ಪಂ. ನಾಮ ನಿರ್ದೇಶಿತ ಸದಸ್ಯ ಇಂದ್ರೇಶ್, ಜಿ.ಪಂ. ಮಾಜೀ ಸದಸ್ಯೆ ಎನ್.ಎಸ್. ಗೀತಾ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ಅವರುಗಳು ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದರು.