ಮಡಿಕೇರಿ, ಫೆ. 11: ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಕೃಷಿ ಇಲಾಖೆಯಿಂದ ನೀಡಲಾಗುವ ಪರಿಹಾರದ ಮೊತ್ತ ರೂ. 5 ಲಕ್ಷವನ್ನು ನಾಪೋಕ್ಲು ಹೋಬಳಿ, ಚೆಯ್ಯಂಡಾಣೆ ಪಂಚಾಯಿತಿ ಚೇಲಾವರ ಗ್ರಾಮದ ಕುಟ್ಟನ ವಾಸುದೇವ ಅವರ ಪತ್ನಿ ಸೀತಮ್ಮ ಅವರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಶಿವಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ವಿತರಿಸಿದರು. ಈ ಸಂದರ್ಭ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು, ಸ್ಥಳೀಯ ಸಹಕಾರ ಬ್ಯಾಂಕ್ ವ್ಯವಸ್ಥಾಪಕಿ ಗೋಪಿ ಮತ್ತು ಸ್ಥಳೀಯರು ಹಾಜರಿದ್ದರು.