ಕುಶಾಲನಗರ, ಫೆ. 11: ಕರ್ನಾಟಕ ಜಾನಪದ ಪರಿಷತ್‍ನ ಜಾನಪದ ಲೋಕ ಪ್ರಶಸ್ತಿಗೆ ಭಾಜನರಾದ ಕುಶಾಲನಗರದ ಬಾಚರಣಿಯಂಡ ಪಿ.ಅಪ್ಪಣ್ಣ ಅವರನ್ನು ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಘಟಕದ ಪದಾಧಿಕಾರಿಗಳು ಅಭಿನಂದಿಸಿದರು.ಅಪ್ಪಣ್ಣ ಅವರ ನಿವಾಸಕ್ಕೆ ತೆರಳಿದ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮತ್ತು ಪದಾಧಿಕಾರಿಗಳು ಹಿರಿಯ ಸಾಹಿತಿಗಳನ್ನು ಮಾಲಾರ್ಪಣೆಗೈದು ಗೌರವಿಸಿದರು.

ಪರಿಷತ್‍ನ ತಾಲೂಕು ಉಪಾಧ್ಯಕ ಪೊನ್ನಚ್ಚನ ಮೋಹನ್, ಭರಮಣ್ಣ ಬೆಟಗೇರಿ, ಗೌರವ ಸಲಹೆಗಾರರಾದ ಎಂ.ಎಚ್.ನಜೀರ್ ಅಹಮ್ಮದ್, ಬಿ.ಸಿ. ಶಂಕರಯ್ಯ, ಡಿ.ಆರ್.ಸೋಮಶೇಖರ್, ಕಾರ್ಯದರ್ಶಿ ವಿನೋದ್, ರಾಣು ಅಪ್ಪಣ್ಣ ಇದ್ದರು.