ಶನಿವಾರಸಂತೆ, ಫೆ. 13: ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡ ‘ಆತ್ಮಯೋಜನೆ ಅರಿವು ಜಾಗೃತಿ' ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಕಲಾವಿದ ಈ ರಾಜು ನೇತೃತ್ವದಲ್ಲಿ ತಂಡದ ಯು.ಡಿ. ಚಂದ್ರಪ್ಪ, ಮೆಂಟೇಸ್ವಾಮಿ, ಆರ್. ಸ್ವಾಮಿ, ವಿನೋದ್, ಅಂಜಲಿ ಹಾಗೂ ಮಂಜುಳಾ ಅವರು ನಟಿಸುವ ಮೂಲಕ ರೈತರಿಗೆ ತರಬೇತಿ, ಯೋಜನೆಗಳ ಸೌಲಭ್ಯದ ಕುರಿತು ಅರಿವು ಮೂಡಿಸಿದರು.QA

ತಾಲೂಕು ಕೃಷಿ, ರೇಷ್ಮೆ, ಸಾಮಾಜಿಕ ಅರಣ್ಯ, ಪಶುಪಾಲನಾ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ್, ಕೃಷಿ ಅಧಿಕಾರಿ ಮಂಜುನಾಥ್, ತಾಂತ್ರಿಕ ವ್ಯವಸ್ಥಾಪಕಿ ಪಲ್ಲವಿ, ತಾಂತ್ರಿಕ ಸಹಾಯಕ ವೇದಪ್ರಿಯ, ಸಿ.ಜೆ. ಗಿರೀಶ್, ಕೆ.ಟಿ. ಹರೀಶ್, ಅಪ್ಪಸ್ವಾಮಿ ಉಪಸ್ಥಿತರಿದ್ದರು.