*ಗೋಣಿಕೊಪ್ಪಲು, ಫೆ. 12 : ಇಲ್ಲಿನ ಕಾವೇರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಕೆ.ದೇವಕಿ ಥೈಲಾಂಡ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾಡಲು ಆಯ್ಕೆಯಾಗಿದ್ದಾರೆ. ‘ಕ್ರಿಯೆಟಿವಿಟಿ ಅಂಡ್ ಇನ್ನೋವೇಷನ್ ಅಟ್ ವರ್ಕ್ ಪ್ಲೇಸ್' ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ. ನಲ್ಲೂರು ಕಿರುಗೂರು ಗ್ರಾಮದ ತೀತರಮಾಡ ಕೆ.ರಾಜ ಅವರ ಪತ್ನಿಯಾಗಿರುವ ದೇವಕಿ ಅವರು ಕೋಟೂರು ಗ್ರಾಮದ ಕೆ.ಎಂ.ಕುಶಾಲಪ್ಪ ಮತ್ತು ಕೆ.ಕೆ.ಕಾವೇರಮ್ಮ ಅವರ ಪುತ್ರಿ.