ಮಡಿಕೇರಿ, ಫೆ. 11: ಬೋಯಿಕೇರಿ ತಿರುವಿನಲ್ಲಿಂದು ಲಾರಿ ಅವಘಡ ಕ್ಕೀಡಾಗಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.ಮಡಿಕೇರಿಯಿಂದ ಕುಶಾಲನಗರ ದತ್ತ ಕಾಫಿ ಸಿಪ್ಪೆಯನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ (ಕೆಎ 17- 3501) ಬೋಯಿಕೇರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿಕೊಂಡಿದೆ. ಪರಿಣಾಮ ಏಳನೇ ಹೊಸಕೋಟೆ ಯಿಂದ ಮಡಿಕೇರಿಯತ್ತ ಬರುತ್ತಿದ್ದ ಸ್ವರಾಜ್ ಮಜ್ದಾ (ಕೆಎ 12, ಎ-6801)ಗೆ ಡಿಕ್ಕಿಯಾಗಿದೆ. ಸ್ವರಾಜ್ ಮಜ್ದಾ ವಾಹನದ ಹಿಂದೆ ಬರುತ್ತಿದ್ದ ಸರ್ಕಾರಿ ಬಸ್ (ಕೆಎ 10, ಎಫ್-0056) ಸ್ವರಾಜ್ ಮಜ್ದಾಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿಚಾಲಕ ಶಿವಣ್ಣ (61) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.