ಸೋಮವಾರಪೇಟೆ, ಫೆ. 13: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಆಡಳಿತ ಮಂಡಳಿಗೆ 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಶ್ರೀಕಾಂತ್, ಬಿ.ಡಿ. ಮಂಜುನಾಥ್, ಹೆಚ್.ಕೆ. ಮಾದಪ್ಪ, ಎಂ.ಸಿ. ರಾಘವ, ಬಿ.ಪಿ. ಶಿವಕುಮಾರ್, ಬಿ.ಆರ್. ಮೃತ್ಯುಂಜಯ್, ಜಿ.ಎ. ಉದಯ, ಎನ್.ಟಿ. ಪರಮೇಶ್, ಹೆಚ್.ಎಸ್. ವೆಂಕಪ್ಪ ಅವರುಗಳು ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ಶಿವಪ್ಪ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಕೆ.ಆರ್. ದಿವ್ಯ, ಮಹಿಳಾ ಮೀಸಲು ಸ್ಥಾನದಿಂದ ಶೋಭಾ ಶಿವರಾಜು, ವರಲಕ್ಷ್ಮೀ ಸಿದ್ದೇಶ್ವರ್, ಹಿಂದುಳಿದ ವರ್ಗ ಮೀಸಲು ಸ್ಥಾನದಿಂದ ಬಿ.ಎಂ. ರಾಮ್‍ಪ್ರಸಾದ್, ಕೆ.ಬಿ. ಸುರೇಶ್ ಅವರುಗಳು ನೇಮಕಗೊಂಡಿದ್ದಾರೆ.

ಸಹಕಾರ ಸಂಘದಲ್ಲಿ ಒಟ್ಟು 15 ಮಂದಿ ನಿರ್ದೇಶಕರ ಆಯ್ಕೆಗೆ ಅವಕಾಶವಿದ್ದು, ಹೆಚ್ಚುವರಿಯಾಗಿ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆದ ಹಿನ್ನೆಲೆ ಕಣದಲ್ಲಿ 15 ಮಾತ್ರ ಉಳಿದಿದ್ದರು. ಇವರುಗಳನ್ನು ಮುಂದಿನ 5 ವರ್ಷಗಳ ಅವಧಿಗೆ ನಿರ್ದೇಶಕರುಗಳನ್ನಾಗಿ ಆಯ್ಕೆಗೊಳಿಸಲಾಗಿದೆ. ರಿಟರ್ನಿಂಗ್ ಅಧಿಕಾರಿಯಾಗಿ ಎಂ.ಈ. ಮೋಹನ್ ಕಾರ್ಯನಿರ್ವಹಿಸಿದರು.