ಮಡಿಕೇರಿ, ಫೆ. 14: ವೀರಾಜಪೇಟೆ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಾರ್ವಜನಿಕರ ಪರವಾಗಿ ಅಲ್ಲಿನ ವಿದ್ಯಾನಗರ ನಿವಾಸಿ ಟಿ.ಎಂ. ಯೋಗೇಶ್ ನಾಯ್ಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್, ಎಕ್ಸ್‍ರೇ ವ್ಯವಸ್ಥೆಗಳಿಲ್ಲ. ಎಕ್ಸ್‍ರೇ ಯಂತ್ರವಿದ್ದರೂ ತಜ್ಞರಿಲ್ಲದೆ ಬಡವರ್ಗದ ಜನತೆ ಖಾಸಗಿ ಕೇಂದ್ರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದು ಬಡ ರೋಗಿಗಳಿಗೆ ಹೊರೆಯಾಗುತ್ತಿದ್ದು, ಆಸ್ಪತ್ರೆಗೆ ಸೌಲಭ್ಯ ಒದಗಿಸಿಕೊಡುವಂತೆ ಮನವಿಯಲ್ಲಿ ಕೋರಿದ್ದಾರೆ.