ನಾಪೋಕ್ಲು, ಫೆ. 14: ಚೆಯ್ಯಂಡಾಣೆ-ನರಿಯಂದಡ ಗ್ರಾಮ ಪಂಚಾಯತ್‍ಗೆ ಒಳಪಟ್ಟ ಕರಡ ಗ್ರಾಮದ ಕಾಫಿ ತೋಟಗಳಿಗೆ ಕಳೆದ ರಾತ್ರಿ ಕಾಡಾನೆ ಗುಂಪು ಧಾಳಿಯಿಟ್ಟು ಬಾರೀ ಬೆಳೆನಷ್ಟ ಸಂಭವಿಸಿದೆ.

ಗ್ರಾಮದ ಚಂಗುಮಯ್ಯ ಸಿ.ಎ.ಲಕ್ಷ್ಮಣ, ಸಿ.ಬಿ.ಮೀನಾಕ್ಷಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಕಾಫಿ ತೋಟಗಳಿಗೆ ಕಳೆದ ರಾತ್ರಿ ಕಾಡಾನೆಗಳ ಹಿಂಡು ಧಾಳಿ ಮಾಡಿ ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅರಣ್ಯ ಇಲಾಖೆ ಕೂಡಲೇ ಕಾಡಾನೆ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಬೆಳೆನಷ್ಟ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.