ವೀರಾಜಪೇಟೆ, ಫೆ. 14: ಅಂದಾಜು 200 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಶಿವಕೇರಿಯ ಪುರಾತನವಾದ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ಸಮುದಾಯದ ಎಂಬತ್ತು ಕುಟುಂಬಗಳ ಒಕ್ಕೂಟದ ಮುಖ್ಯಸ್ಥ ಹೆಚ್.ಡಿ ವೆಂಕಟರಮಣ ಅವರು ದಾನಿಗಳ ಸಮ್ಮುಖದಲ್ಲಿ ನೆರವೇರಿಸಿದರು. ಈ ಸಂದರ್ಭ ಸುಂಟಿಕೊಪ್ಪದ ವಾಸ್ತು ಶಿಲ್ಪಿ ತಿಮ್ಮಣ್ಣ, ಸಮಿತಿ ಸದಸ್ಯರಾದ ಹೆಚ್.ಜಿ. ಪಾಪಯ್ಯ, ಹೆಚ್.ಡಿ. ವಾಸು, ವಿ.ಕೆ. ಸತೀಶ್‍ಕುಮಾರ್ ಸಚ್ಚೀಂದ್ರ ಚಂದ್ರ ಉಪಸ್ಥಿತರಿದ್ದರು. ಪ. ಪಂ. ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಸದಸ್ಯರಾದ ರಚನ್ ಮೇದಪ್ಪ, ರಂಜಿ ಪೂಣಚ್ಚ, ರಾಜೇಶ್, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.