ಮಡಿಕೇರಿ, ಫೆ. 15: ಯಾವದೇ ಕಾರಣಕ್ಕೂ ಕಾಂಗ್ರೆಸ್ ಕಾಲಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಜೀವಿಜಯ ಸ್ಪಷ್ಟ ಪಡಿಸಿದ್ದಾರೆ.

‘ಶಕ್ತಿ’ಗೆ ಈ ಕುರಿತು ಹೇಳಿಕೆ ನೀಡಿರುವ ಅವರು ತಾನು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುವ ಆಲೋಚನೆಯನ್ನು ಎಂದಿಗೂ ಮಾಡಿಲ್ಲ. ಕೊಡಗಿನಲ್ಲಿ ಜೆಡಿಎಸ್ ಭದ್ರವಾಗಿ ಬಲಗೊಳ್ಳುತ್ತಿದ್ದು, ಇದನ್ನು ಸಹಿಸದ ಕಾಂಗ್ರೆಸ್‍ನ ಕೆಲವರು ತನ್ನನ್ನು ಹಾಗೂ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಬೇಕೆನ್ನುವ ದುರುದ್ದೇಶದಿಂದ ಕುತಂತ್ರ ಮಾಡುತ್ತಿದ್ದಾರೆ ಎಂದು ಜೀವಿಜಯ ಹೇಳಿದ್ದಾರೆ.