ಚೆಟ್ಟಳ್ಳಿ, ಫೆ. 15: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಒಂದು ವರ್ಷ ತುಂಬಿದ ಸಂತಸಕ್ಕಾಗಿ ಅವರ ಅನುದಾನದಲ್ಲಿ ಸಿಕ್ಕಿದ ತೆಂಗಿನ ಗಿಡಗಳನ್ನು ಶ್ರೀಮಂಗಲ ಗ್ರಾಮದಲ್ಲಿರುವ ಪ್ರತೀ ರೈತರ ಮನೆ-ಮನೆಗೆ ಸ್ವಂತ ಖರ್ಚಿನಿಂದ ತಲಪಿಸಿ ಸಂತಸ ಹಂಚಿಕೊಂಡರು.

ಚೇರಳ ಮತ್ತು ಈರಳೆ ಗ್ರಾಮಗಳು ಸಾವಯವ ಗ್ರಾಮದ ಯೋಜನೆಯಡಿಯಲ್ಲಿ ಆಯ್ಕೆಯಾಗಿದ್ದು, ಶ್ರೀಮಂಗಲ ಗ್ರಾಮ ಪ್ರತ್ಯೇಕವಾಗಿ ಉಳಿದಿರುವದರಿಂದ ಗಿಡ ಹಂಚುವ ಕಾರ್ಯಕ್ರಮವನ್ನು ಶ್ರೀಮಂಗಲ ಗ್ರಾಮದಿಂದ ಆರಂಭ ಮಾಡಲಾಯಿತು ಎಂದು ಮಣಿ ಉತ್ತಪ್ಪ ತಿಳಿಸಿದರು.