ಕುಶಾಲನಗರ, ಫೆ. 16: ಕುಶಾಲನಗರ ಸಮೀಪ ಕೂಡಿಗೆ ಕುಶಾಲನಗರ ಮಧ್ಯೆ ಕೂಡ್ಲೂರಿನ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಸಮೀಪ ಕಾಫಿ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯ ಕಾಂಪೌಂಡ್ ಮತ್ತು ಗೋಡೆ ಜಖಂಗೊಂಡಿದೆ. ಲಾರಿ ಚಾಲಕ ಹೇಮಂತ್ ಸಣ್ಣ ಪುಟ್ಟ ಗಾಯಗಳಾಗಿ, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಚಿಕ್ಕಮಗಳೂರಿನ ಪ್ರಜ್ವಲ್ ಎಂಬವರಿಗೆ ಸೇರಿದ್ದು, ಕೂಡ್ಲೂರು ಕಾಫಿ ಸಂಗ್ರಹ ಕೇಂದ್ರದಿಂದ ಕಾಫಿ ಲೋಡ್ ಮಾಡಿಕೊಂಡು ಮಂಗಳೂರಿಗೆ ಹೊರಟಿತ್ತು. ಕುಶಾಲನಗರ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.