ಸಿದ್ದಾಪುರ, ಫೆ. 16: ಸಿದ್ದಾಪುರ ನಗರ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಎ.ಎನ್ ವಾಸು, ಕಾರ್ಯದರ್ಶಿ ಯಾಗಿ ರೆಜಿತ್ ಕುಮಾರ್ ಗುಹ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಎ.ಎನ್ ವಾಸು, ಉಪಾಧ್ಯಕ್ಷರಾಗಿ ಎಸ್.ಎಂ ಮುಬಾರಕ್, ಕಾರ್ಯದರ್ಶಿಯಾಗಿ ರೆಜಿತ್ ಕುಮಾರ್ ಗುಹ್ಯ, ಸಹ ಕಾರ್ಯದರ್ಶಿಯಾಗಿ ಎ.ಎಸ್ ಮುಸ್ತಫ, ಖಜಾಂಜಿಯಾಗಿ ಎಂ.ಎ ಅಜೀಜ್, ಗೌರವ ಅಧ್ಯಕ್ಷರಾಗಿ ಅಂಚೆಮನೆ ಸುಧಿಕುಮಾರ್, ನಿರ್ದೇಶಕರಾಗಿ ಆರ್.ಸುಬ್ರಮಣಿ, ಆರ್.ರತೀಶ್ ಕುಮಾರ್, ಸದಸ್ಯರಾಗಿ ಸತೀಶ್ ನಾರಾಯಣ್, ಅಜಿತ್ ಕರುಂಬಯ್ಯ, ಕರುಣ್ ಕಾಳಯ್ಯ, ಲೂಯಿಸ್ ಆಂಟೋಣಿ, ಪಪ್ಪು ತಿಮ್ಮಯ್ಯ ಆಯ್ಕೆಯಾಗಿದ್ದಾರೆ.

ಇದಕ್ಕೂ ಮೊದಲು ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವಾರ್ಷಿಕ ವರದಿ ವಾಚಿಸಿ, ಅನುಮೋದಿಸಲಾಯಿತು. ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸ ಲಾಯಿತು.