ಮಡಿಕೇರಿ, ಫೆ. 18: ಕ್ರಿಕೆಟ್ ಸ್ಟೇಡಿಯಂ ಹಾಗೂ ಸ್ಮಶಾನ ಜಾಗದ ವಿಚಾರದಲ್ಲಿ ಉಂಟಾಗಿ ರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಈ ಕುರಿತು ಜಂಟಿ ಸಭೆ ನಡೆಸಲಾಗು ವದು ಎಂದು ತಿಳಿಸಿದರು.‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಸೋಮವಾರ ಅಥವಾ ಮಂಗಳವಾರ ಸ್ಟೇಡಿಯಂ ಸಮಿತಿಯವರು ಪಾಲೆಮಾಡು ನಿವಾಸಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯುವದಾಗಿ ತಿಳಿಸಿದರು. ಜಿಲ್ಲಾಡಳಿತ ಎಲ್ಲರ ಪರವಾಗಿ ಆಡಳಿತ ನಡೆಸಬೇಕಾಗುತ್ತದೆ. ಯಾವದೇ ಕಾರಣಕ್ಕೂ ಪ್ರತಿಭಟನೆಗಳನ್ನು ಬಯಸುವದಿಲ್ಲ. ಈ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥ ಗೊಳಿಸಲು ಪ್ರಯತ್ನ ನಡೆಸಲಿರುವ ದಾಗಿ ತಿಳಿಸಿದ ಅವರು, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಮಾಹಿತಿಯಿತ್ತರು.