ಸೋಮವಾರಪೇಟೆ, ಫೆ. 19: ಸಮೀಪದ ಐಗೂರು ಗ್ರಾಮದ ಶಿವಾಜಿ ಸೇನೆಯ ವತಿಯಿಂದ ಐಗೂರಿನಲ್ಲಿ ಛತ್ರಪತಿ ಶಿವಾಜಿ ಅವರ ಜಯಂತಿಯನ್ನು ಆಚರಿಸಲಾಯಿತು. ಶಿವಾಜಿ ಸೇನೆಯ ಅಧ್ಯಕ್ಷ ಭರತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಿವಾಜಿ ಸೇನೆಯ ತಾಲೂಕು ಅಧ್ಯಕ್ಷ ಮಿಲನ್, ಐಗೂರು ಘಟಕದ ಯತೀಶ್, ಮನೋಜ್, ಶರತ್, ಜೀವನ್, ಸಿಮೋದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.