ಶನಿವಾರಸಂತೆ, ಪೆ.19: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡಿಗಳಲೆ ಗ್ರಾಮದ ನಿವಾಸಿ ಮಣಿಯಮ್ಮ ಎಂಬವರ ಪುತ್ರ ಭುವನ್ (10) ಹುಟ್ಟಿದಾಗಿನಿಂದ ಬುದ್ಧಿ ಮಾಂದ್ಯನಾಗಿದ್ದು, ಮಾತನಾಡಲು ಆಗುವದಿಲ್ಲ ತನ್ನ ಮಗನಿಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಾರ್ವಜನಿಕರಿಂದ ನೆರವು ಬಯಸಿದ್ದಾರೆ.

ಮಣಿಯಮ್ಮ ಕೂಲಿ ಕೆಲಸ ಮಾಡಿಕೊಂಡು ಶನಿವಾರಸಂತೆಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಬುದ್ಧಿಮಾಂದ್ಯ ಮಗ ನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ. ಇತ್ತೀಚೆಗೆ ಶನಿವಾರಸಂತೆಯ ಸರಕಾರಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ || ಶಿವಪ್ರಸಾದ್ ಅವರನ್ನು ಭೇಟಿ ಮಾಡಿ ಮಗನನ್ನು ಪರೀಕ್ಷೆ ಮಾಡಿಸಲಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಗನ ಚಿಕಿತ್ಸೆಗಾಗಿ ಹಣದ ಸಹಾಯಧನ ನೀಡಬೇಕಾಗಿ ಕೋರಿದ್ದಾರೆ.ಸಹಾಯ ಮಾಡುವವರು ಗುಡುಗಳಲೆಯ ಕೆನರಾ ಬ್ಯಾಂಕ್ ಮಣಿಯಮ್ಮ ಹಾಗೂ ಭುವನ್‍ಜಂಟಿ ಖಾತೆ ನಂ : 1473108014416 ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9663787561 ಸಂಪರ್ಕಿಸಬಹುದು.