ಸುಂಟಿಕೊಪ್ಪ, ಫೆ. 20: ಸುಂಟಿಕೊಪ್ಪ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪ್ರಥಮ ಪಿ.ಯು.ಸಿ. ಪರೀಕ್ಷೆಯಲ್ಲಿ ಜಿ. ಕುಮಾರ್ ನಾಯ್ಕ್ ವರದಿ ಜಾರಿಗೊಳಿಸಲು ಆಗ್ರÀಹಿಸಿ ಕೊಡಗು ಜಿಲ್ಲಾ ಪ್ರಾಂಶುಪಾಲರ ಸಂಘ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘ ಕರೆ ನೀಡಿದ್ದ ಹಿನ್ನೆಲೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.

ಈ ಸಂದರ್ಭ ಉಪನ್ಯಾಸಕಿ ಸಾಂಸ್ಕøತಿಕ ಕಾರ್ಯದರ್ಶಿ ಜಯಶ್ರೀ, ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಸೋಮಚಂದ್ರ, ಕಾಲೇಜಿನ ಕಲಾವಿಭಾಗ ಮತ್ತು ವಿಜ್ಞಾನ ವಿಭಾಗದ ಉಪನ್ಯಾಸಕರು ಗಳಾದ ಈಶ, ಕವಿತ. ಕೆ. ಸಿ, ರಾಜೇಶ್ವರಿ, ಕವಿತಭಕ್ತ್, ದಮಯಂತಿ, ಮಂಜುಳ ಹಾಜರಿದ್ದರು.