ಗೋಣಿಕೊಪ್ಪ, ಫೆ. 20: ಅಳಮೇಂಗಡ ಕ್ರಿಕೆಟ್ ಕಪ್ ಹಾಗೂ ಅಮ್ಮಕೊಡವ ಕ್ರಿಕೆಟ್ ಕಪ್ ಗೆ ತಲಾ 5 ಲಕ್ಷ ಅನುದಾನ ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಕೊಡಗು ಉಸ್ತುವಾರಿ ಸಚಿವ ಸೀತಾರಾಂ ಮುಂದಾಳತ್ವದಲ್ಲಿ ತೆರಳಿದ್ದ ನಿಯೋಗಕ್ಕೆ ಸಿ.ಎಂ. ಭರವಸೆ ನೀಡಿದ್ದಾರೆ. ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರತ್ಯು, ಅಳಮೇಂಗಡ ಕ್ರಿಕೆಟ್ ಸಮಿತಿ ಕಾರ್ಯದರ್ಶಿ ಮೋಹನ್, ಪ್ರಮುಖರಾದ ಅಳಮೇಂಗಡ ರಮೇಶ್, ಕಾಂಗ್ರೆಸ್ ಮುಖಂಡ ಆದೇಂಗಡ ವಿನು ಉತ್ತಪ್ಪ ಇದ್ದರು.