*ಗೋಣಿಕೊಪ್ಪಲು, ಫೆ. 22: ಕುಟ್ಟ, ಶ್ರೀಮಂಗಲ ವಿಭಾಗದಿಂದ ಬಿ.ಜೆ.ಪಿ. ಪಕ್ಷಕ್ಕೆ 50ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸೇರ್ಪಡೆಗೊಂಡರು.

ಕುಟ್ಟ ಕೊಡವ ಸಮಾಜದಲ್ಲಿ ನಡೆದ ಬಿ.ಜೆ.ಪಿ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾ ಅಧ್ಯಕ್ಷ ಮನು ಮುತ್ತಪ್ಪ, ತಾಲೂಕು ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಪ್ರಮುಖರಾದ ಅಜ್ಜಮಾಡ ಜಯಾ, ಐಪುಮಾಡ ಸಂಜು, ಚೋಕಿರ ಕಾರ್ತಿಕ್, ಐಪುಮಾಡ ಮುತ್ತಪ್ಪ, ತಡಿಯಂಗಡ ಆದರ್ಶ್, ನೂರೇರ ರಾಜ, ಮುಂಡುಮಾಡ ಸಂತು, ಅಜ್ಜಮಾಡ ಜೀತು, ಬಾದುಮಂಡ ಪ್ರವೀಣ್, ಎ.ಕೆ. ನವೀನ್, ಚೀಂಡಮಾಡ ಗಿರಿ, ಚೇರಂಡ ಅಯ್ಯಪ್ಪ, ಚೆರಿಯಪಂಡ ಸಂಜು, ಮಂಜೀರ ಸುರೇಶ್, ಗೌಡಂಡ ಈರೇಶ್, ಚೀಕೇರ ಬೋಪಣ್ಣ, ಇರ್‍ಲಾಂಡಿ, ಮತ್ರಂಡ ಅಯ್ಯಪ್ಪ, ಕಾಕೇರ ವಿಜಯ, ಬಸವರಾಜ್, ನೂರೇರ ವಿಜು, ಕೈಪಳೆರ ಪ್ರಿನ್ಸ್, ನೂರೇರ ಅಯ್ಯಪ್ಪ, ಐಪುಮಾಡ ಚಂಗಪ್ಪ, ಬಾದುಮಂಡ ಕವನ್, ಬಲ್ಯಮೀದೇರಿರ ವಿಜು, ಅಜ್ಜಮಾಡ ಸುಬ್ಬಯ್ಯ, ಅಜ್ಜಮಾಡ ಕುಶಾಲಪ್ಪ ಸೇರ್ಪಡೆಗೊಂಡರು.