*ಗೋಣಿಕೊಪ್ಪಲು, ಫೆ. 25: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷ ಬೆಂಬಲಿತ ಸದಸ್ಯರು ಜಯಶೀಲರಾಗಿದ್ದನ್ನು ಶ್ಲಾಘಿಸಿ ಶಾಸಕ ಕೆ.ಜಿ. ಬೋಪಯ್ಯ ಅಭಿನಂದನೆ ಸಲ್ಲಿಸಿದರು.ತಾಲೂಕು ಭಾ.ಜ.ಪ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಆರ್.ಎಂ.ಸಿ. ಚುನಾಯಿತರಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು. ಅಧ್ಯಕ್ಷ ಸುವಿನ್ ಗಣಪತಿ, ಉಪಾಧ್ಯಕ್ಷ ಬಾಲಕೃಷ್ಣ, ಕ್ಷೇತ್ರದ ಸದಸ್ಯರುಗಳಾಗಿ ಕೆ.ಯು. ಭೀಮಣಿ, ಜೆ.ಕೆ. ಅಯ್ಯಪ್ಪ, ಹೆಚ್.ಎನ್. ಮೋಹನ್ ರಾಜ್, ನಾಮೇರ ಧರಣಿ, ಚೀಯಕ್‍ಪೂವಂಡ ಜಿ. ಸುಬ್ರಮಣಿ, ಚಂಗಪ್ಪ ಮೇದಪ್ಪ, ಪೂಣಚ್ಚ, ಅಜ್ಜಿಕುಟ್ಟಿರ ಎಂ. ಮುತ್ತಪ್ಪ, ಬೊಳ್ಳಜೀರ ಸುಶೀಲಾ ಅವರುಗಳನ್ನು ಅಭಿನಂದಿಸಲಾಯಿತು.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೀನಾ ಪ್ರಕಾಶ್, ರಾಜ್ಯ ಯುವ ಮೋರ್ಚಾ ಖಜಾಂಚಿ ಶಶಾಂಕ್ ಭೀಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಜಿಲ್ಲಾ ವ್ಯಾಪಾರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕಾಫಿ ಪ್ರಕೋಷ್ಠ ಅಧ್ಯಕ್ಷ ಕುಪ್ಪುಡಿರ ಪೊನ್ನಪ್ಪ. ಹಣಕಾಸು ಅಧ್ಯಕ್ಷ ಬೊಟ್ಟಂಗಡ ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿ ಸುಬ್ಬಯ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಅಜಿತ್ ಕರುಂಬಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ರೈತ ಮೋರ್ಚಾ ಅಧ್ಯಕ್ಷ ಕಂಜಿತಂಡ ಮಂದಣ್ಣ, ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಮೇಶ್ವರ, ಎಸ್.ಸಿ. ಮೋರ್ಚಾ ಅಧ್ಯಕ್ಷ ಜಯಾ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರಾಜಾ ಚಂದ್ರಶೇಖರ್, ಒ.ಬಿ.ಸಿ ಅಧ್ಯಕ್ಷ ಸುಭಾಷ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುವೀನ್ ಗಣಪತಿ, ಅಲ್ಪಸಂಖ್ಯಾತ ರಾಜ್ಯ ಸಮಿತಿ ಕಾರ್ಯದರ್ಶಿ ಜೋಕಿಂ, ಜಿ.ಪಂ. ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಅಚ್ಚಪಂಡ ಮಹೇಶ್, ಶಶಿ ಸುಬ್ರಮಣಿ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಘು ನಾಣಯ್ಯ, ತಾಲೂಕು ಉಪಾಧ್ಯಕ್ಷರು ಗಳಾದ ಕಾವೇರಿ ಮಂದಣ್ಣ, ಮಚ್ಚಮಾಡ ಸುಮಂತ್, ಮನು ರಾಮಚಂದ್ರ, ಚೋಕಿರ ಕಲ್ಪನಾ ತಿಮ್ಮಯ್ಯ, ಗಣೇಶ್, ತಾಲೂಕು ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಮೇವಂಡ ಚಶ್ಮಾ, ಸೆಲ್ವಿ, ಭರತ್, ಅಜ್ಜಿಕುಟ್ಟಿರ ಪ್ರವೀಣ್, ಮಲಚೀರ ಕವಿತಾ, ತಾಲೂಕು ಖಜಾಂಚಿ ಚೋಡಮಾಡ ಶ್ಯಾಂ, ಜಿ.ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಮಧು ದೇವಯ್ಯ ಉಪಸ್ಥಿತರಿದ್ದರು.